ಕೊಪ್ಪಳ,: ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೆಡಿಎಸ್ಎಸ್ ಬೆಂಗಳೂರು, ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತಿ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪರಶುರಾಮ್ ಕೆರೆಹಳ್ಳಿ ರವರ ಅಧ್ಯಕ್ಷತೆಯಲ್ಲಿ ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ಕೊಪ್ಪಳ ಜಿಲ್ಲಾ ಸಮಿತಿ ಮತ್ತು ಕೊಪ್ಪಳ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳಾಗಿ ಮಹಿಳಾ ಜಿಲ್ಲಾಧ್ಯಕ್ಷರಾಗಿ ಪಾರ್ವತಮ್ಮ ಹರಿಗೋಲ್, ಜಿಲ್ಲಾ ಖಜಾಂಚಿ ಯಮನೂರ್ ನಾಯಕ್ ಹುಲಿ ಹೈದರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಕೀರಪ್ಪ ದೊಡ್ಡಮನಿ ಬೂದಗುಂಪಾ, ಜಿಲ್ಲಾ ಸಂಘಟನಾ ಸಂಚಾಲಕರಾಗಿ ಪರಮೇಶ್ ಮೆಳ್ಳಿಕೇರಿ, ದಾದಾಪೀರ್ ಮಂಡಲಗಿರಿ ಬಹದ್ದೂರ್ ಬಂಡಿ ಜಿಲ್ಲಾ ಸಂಘಟನಾ ಸಂಚಾಲಕರು, ಸಂಜಯ್ ದಾಸರ್, ಕೊಪ್ಪಳ ತಾಲೂಕ ಅಧ್ಯಕ್ಷರಾಗಿ ಹನುಮಂತಪ್ಪ ಕಾಸನಕಂಡಿ, ರಮೇಶ್ ಕೆರೆಹಳ್ಳಿ ತಾಲೂಕು ಸಂಘಟನಾ ಸಂಚಾಲಕ ಮರಿಸ್ವಾಮಿ ಓಜನಹಳ್ಳಿ, ಕೊಪ್ಪಳ ಮಹಿಳಾ ತಾಲೂಕ ಅಧ್ಯಕ್ಷರಾಗಿ ಮಂಜುಳಮ್ಮ ಸಿಂದೋಗಿ, ಯಲಬುರ್ಗಾ ತಾಲೂಕ ಅಧ್ಯಕ್ಷರಾಗಿ ಶರಣಮ್ಮ ಯಲಬುರ್ಗಿ, ಅಳವಂಡಿ ಹೋಬಳಿ ಘಟಕದ ಅಧ್ಯಕ್ಷರಾಗಿ ಶೋಭಾ ಪಿ.ಮಠದ, ಗ್ರಾಮ ಘಟಕದ ಅಧ್ಯಕ್ಷರಾಗಿ ಶಿಲ್ಪ ಪಿ. ಮಠದ, ಶೈಲಮ್ಮಶ್ರೀ ಮಠದ, ಯಲಬುರ್ಗಾ ತಾಲೂಕ ಅಧ್ಯಕ್ಷರಾಗಿ ಪ್ರಕಾಶ್ ಬಾವಿಮನಿ, ಗಂಗಾವತಿ ತಾಲೂಕ ಅಧ್ಯಕ್ಷರಾಗಿ ವೀರೇಶ್ ನಾಯಕ್, ಕನಕಗಿರಿ ತಾಲೂಕು ಅಧ್ಯಕ್ಷರಾಗಿ, ನೂರಮಹಮ್ಮದ್ ಸೇರಿದಂತೆ ಅನೇಕ ಪದಾಧಿಕಾರಿಗಳು ಆಯ್ಕೆಗೊಂಡರು.
Reported By : Shivakumar Hiremath
Tags
ರಾಜಕೀಯ