Vijayanagara , ಹೊಸಪೇಟೆ ನಗರದಲ್ಲಿ ಸರ್ಕಾರಿ ನೌಕರ ಮುಷ್ಕರ


ಹೊಸಪೇಟೆ : ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೋಳಿಸಲು ಸರ್ಕಾರವನ್ನು ಆಗ್ರಹಿಸಿ ಬುಧವಾರದಿಂದ  ಅನಿರ್ಧಷ್ಟವಧಿ   ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ   ವಿಜಯನಗರ ಜಿಲ್ಲಾಧ್ಯಕ್ಷರು ಜಿ. ಮಲ್ಲಿಕಾರ್ಜುನ ಗೌಡ ತಿಳಿಸಿದರು.

ಅವರು ನಗರದ ತಾಹಿಸೀಲ್ದಾರ್ ಕಾರ್ಯಾಲಕ್ಜೆ ಭೇಟಿ ನೀಡಿ ಕೆಲಸದಲ್ಲಿ ತೊಡಿಗಿದ್ದ ಸಿಬ್ಬಂದಿ ಅವರನ್ನು ಹೊರಗಡೆ  ಕಳುಹಿಸಿ ಕಾರ್ಯಾಲಕ್ಕೆ ಬೀಗ ಹಾಕಿದ ಅನಂತರ ಮಾತನಾಡಿದರು.

ರಾಜ್ಯದಲ್ಲಿ ಸಮಸ್ತ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರಕ್ಕೆ ಬೆಂಬಲ ನೀಡುತ್ತಾರೆ ಎಂದರು.

ಏಳನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು 2022ರ ಜುಲೈ 1ರಿಂದ ಅನ್ವಯಿಸಿ ಶೇ 40 ಫಿಟ್ಮೆಂಟ್ ಬಿಡುಗಡೆ ಹಾಗೂ ಹೊಸಪಿಂಚಿಣಿ ಯೋಜನೆ (ಎನ್ ಪಿ ಎಸ್ ) ರದ್ದುಪಡಿಸುವ ತೀರ್ಮಾನವನ್ನು ಸರ್ಕಾರ ಕೈಗೊಳ್ಳಬೇಕೆಂದರು.

ವೇತನ ಆಯೋಗದ ಶಿಫಾರಸು ತಡವಾಗುವುದರಿಂದ ಕೂಡಲೇ ಮದ್ಯಂತರ ವರದಿ ಪಡೆದು ನೌಕರರ ಹಿತರಕ್ಷಣೆ ಮಾಡಬೇಕು.
ಜತೆಗೆ ರಾಜಸ್ತಾನ್, ಛತೀಶ್ ಗಡ್, ಜಾರ್ಖ0ಡ್, ಪಂಜಾಬ್, ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಎನ್ ಪಿ ಎಸ್ ರದ್ದು ಗೊಳಿಸಿ ಹಳೆ ಪೆನ್ಷನ್ ಯೋಜನೆ ಜಾರಿಗೆ ತಂದಿರುವಂತೆ ಕರ್ನಾಟಕದಲ್ಲಿಯೂ ಅನುಷ್ಠಾನಕ್ಕೆ ತರಬೇಕೆಂದರು.

ನಗರದ ಬಹುತೇಕ ಸರ್ಕಾರ ಕಾರ್ಯಾಲಯಗಳನ್ನು ಮುಚ್ಚಿರುವುದುರಿಂದ ಕೆಲಸಗಳು ಸ್ಥಿಗತ ಗೊಂಡಿವೆ.

 ವರದಿ ಕಾವ್ಯ ನೇಕರ್ ಸಿದ್ದಿ ಟಿವಿ ವಿಜಯನಗರ 
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">