ಮಲ್ಲಿಕಾರ್ಜುನ.ಹೆಚ್.ಎಸ್ ಅವರಿಗೆ ಪಿಹೆಚ್ಡಿ ಪದವಿ
ಸಿರುಗುಪ್ಪ ಪಟ್ಟಣದ ಕೆಹೆಚ್ಬಿ ಕಾಲೋನಿಯ ನಿವಾಸಿಯಾದ ಮಲ್ಲಿಕಾರ್ಜುನ.ಹೆಚ್.ಎಸ್ ಅವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಹೆಚ್ಡಿ ಪದವಿ ನೀಡಿದೆ.
ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತç ವಿಭಾಗದ ವ್ಯವಹಾರ ಅಧ್ಯಯನ ನಿಕಾಯದ ಸಹಾಯಕ ಪ್ರಾಧ್ಯಪಕರಾದ ಡಾ.ಚಲವಾದಿ ಚನ್ನಬಸಪ್ಪ ಈರಪ್ಪ ಅವರ ಮಾರ್ಗದರ್ಶನದಲ್ಲಿ “ಪರ್ಫಾರ್ಮನ್ಸ್ ಆಂಡ್ ಪ್ರಾಬ್ಲಮ್ಸ್ ಆಫ್ ಫಾಸ್ಟ್ ಮೂವಿಂಗ್ ಕಂಸೂಮರ್ ಗೂಡ್ಸ್ ಫರ್ಮ್ಸ್ ಇನ್ ಕರ್ನಾಟಕ - ಆನ್ ಎಂಪಿರಿಕಲ್ ಸ್ಟಡಿ” ಎಂಬ ಮಹಾಪ್ರಬಂಧ ಮಂಡಿಸಿದ್ದಕ್ಕಾಗಿ ವಿಶ್ವವಿದ್ಯಾಲಯವು ಪಿಹೆಚ್ಡಿ ಪದವಿ ಘೋಷಿಸಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.