SBI ವತಿಯಿಂದ ಮ್ಯಾರಥಾನ್ ಜಾಗೃತಿ ಅರಿವು ಕಾರ್ಯಕ್ರಮ
ಬಳ್ಳಾರಿ : ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ ಬಿ ಐ ಮೇನ್ ಬ್ರಾಂಚ್ ನೇತೃತ್ವದಲ್ಲಿ ರಾಷ್ಟ್ರದ ಏಳಿಗೆಗಾಗಿ ಸಾಂಸ್ಕೃತಿಕ, ಸಮಗ್ರತ ಮ್ಯಾರಥಾನ್ ಜಾಗೃತಿ ಅರಿವು ಕಾರ್ಯಕ್ರಮವನ್ನು ಅಕ್ಟೋಬರ್ 2 ನೇ ಮುಂಜಾನೆ 7 ಗಂಟೆಗೆ ಎಸ್ ಬಿ ಐ ಮೇನ್ ಬ್ರಾಂಚ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಮ್ಯಾರಥಾನ್ ಉದ್ಘಾಟಿಸಿ ಮಾತನಾಡಿದ ಮ್ಯಾನೇಜರ್ ರವಿ ರಾಮು ಮೂರ್ತಿ ಅವರು ವಿಜಿಲೆನ್ಸ್ ಅವೇರ್ನೆಸ್ ಪ್ರಯುಕ್ತ ಜಾಗೃತಿ ಹರಿವು ಸಪ್ತಾಹ, ವಾಕಥಾನ್ ಕಾರ್ಯಕ್ರಮವನ್ನು ಬಳ್ಳಾರಿ ಮೇನ್ ಬ್ರಾಂಚ್ ಇಂದ ಮೋತಿ ಸರ್ಕಲ್ ಹೊಸಪೇಟೆ ರೋಡ್ ಕೌಲ್ ಬಜಾರ್ ಫಸ್ಟ್ ಗೆಟು ರಾಯಲ್ ಸರ್ಕಲ್ ರಿಂದ ಎಸ್ಬಿಐ ಮೇನ್ ಬ್ರಾಂಚ್ ವರೆಗೂ ಸಾಗಿ ಬಂತು.
ಈ ಮ್ಯಾರಥಾನ್ ಓಟದಲ್ಲಿ ಬ್ಯಾಂಕ್ ಸಿಬ್ಬಂದಿ ಭಾಗವಹಿಸಿ ಯಶಸ್ವಿ ಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಡಿ ಜಿ ಎಂ ಪಂಕಜ್ ಕುಮಾರ್, ಆರ್ ಎಂ ರವಿ ರಾಮ್ ಮೂರ್ತಿ, ಎಜಿಎಂ ರಾಮು ಮುಚ್ಚಿ, ಎಜಿಎಂ ಮಾನಸ ರಾಜನ್ ಮಿಸ್ರಾ, ಎ ಜಿ ಎಂ ಅನಿಲ್ ಸಿನಹ, ಚೀಪ್ ಮ್ಯಾನೇಜರ್ ಪ್ರೇಮ್ ಸಿಂಗ್, ಚೀಫ್ ಮೆನೇಜರ್ ಬಾಲಾಜಿ ನೂರಾರು ಜನ ಎಸ್ ಬಿ ಐ ಬ್ಯಾಂಕ್ ಸಿಬ್ಬಂದಿ ಭಾಗವಹಿಸಿದ್ದರು.