ಇತ್ತಿಚೆಗೆ ಗಂಗಾವತಿಯ ಎಪಿಎಂಸಿ ಸಮುದಾಯ ಭವನದಲ್ಲಿ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ ಕರಾಟೆ ಸಂಸ್ಥೆ ವತಿಯಿಂದ ಆಯೋಜನೆ ಮಾಡಲಾದ ಏಳನೇ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ ನಡೆಸಲಾಯಿತು ಈ ಕರಾಟೆ ಪಂದ್ಯಾವಳಿಯಲ್ಲಿ 550 ಕರಾಟೆ ಪಟಗಳು ನಾನಾ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು ಕಂಪ್ಲಿಯ ರೈನ್ಬೋ ಗ್ಲೋಬಲ್ ಸ್ಕೂಲ್ ಶಾಲೆಯ 15 ವಿದ್ಯಾರ್ಥಿಗಳು ಭಾಗವಹಿಸಿ. ವಿಜೇತರಾಗಿದ್ದಾರೆ.
ಕಾಲ್ಪನಿಕ ಯುದ್ಧ ಕಟ ವಿಭಾಗದಲ್ಲಿ 7ನೇ ತರಗತಿ ವಿದ್ಯಾರ್ಥಿ ಯಾದ ಸೋಮರಾಜ್ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ, 5ನೇ ತರಗತಿ ವಿದ್ಯಾರ್ಥಿ ಆದಂತಹ ಸೋಹೇಬ್ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ 8ನೇ ತರಗತಿ ವಿದ್ಯಾರ್ಥಿ ಯಾದ ಸೊಹೈಲ್ ಕಥಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು ಕುಮೆಟೆ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾನೆ 7ನೇ ತರಗತಿ ವಿದ್ಯಾರ್ಥಿಯಾದಂತಹ ಶ್ರೀನಿವಾಸ್ ಕಥಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು ಕುಮಟೆ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾನೆ 3ನೇ ತರಗತಿ ವಿದ್ಯಾರ್ಥಿ ಯಾದ ರಯಾನ್ ಕಥಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ 3ನೇ ತರಗತಿ ವಿದ್ಯಾರ್ಥಿ ನಿಸಾರ್ ಅಹ್ಮದ್ ದ್ವಿತೀಯ ಸ್ಥಾನ ಪಡೆದಿದ್ದಾನೆ 6ನೇ ತರಗತಿ ವಿದ್ಯಾರ್ಥಿ ಯಾದಂತಹ ಫಯಾಜ್ ದ್ವಿತೀಯ ಸ್ಥಾನ ಪಡೆದಿದ್ದಾನೆ 6ನೇ ತರಗತಿ ವಿದ್ಯಾರ್ಥಿಯದಂತ ಶುಭಾಷ್ ತೃತೀಯ ಸ್ಥಾನವನ್ನು ಪಡೆದಿದ್ದಾನೆ 7ನೇ ತರಗತಿ ವಿದ್ಯಾರ್ಥಿ ಆದರ್ಶ ತೃತೀಯ ಸ್ಥಾನ ಪಡೆದಿದ್ದಾನೆ.ಮತ್ತು ಮಹಿಳೆಯರ ಇಂಡೋಜನ್ ಕಥ ವಿಭಾಗದಲ್ಲಿ ವರ್ಣಿಕ ದ್ವಿತೀಯ ಸ್ಥಾನ,ಹಿಂದೂಮತಿ ದ್ವಿತೀಯ ಸ್ಥಾನ,ಮೈತ್ರಿ ದ್ವಿತೀಯ ಸ್ಥಾನ,ಫಲಕನಾಜ್ ತೃತೀಯ ಸ್ಥಾನ ಸ್ಥಾನವನ್ನು ಪಡೆದು ನಮ್ಮ ಶಾಲೆಯ ಗೌರವವನ್ನು ಹೆಚ್ಚಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಲವು ತರಹದ ಜೋದ್ಯೋಗಿಕ ಶಿಕ್ಷಣ ಕೊಡುವುದರ ಜೊತೆಗೆ ಹಸ್ತ ಕೌಶಲ್ಯವನ್ನು ಸಹಶ್ರಮದಲ್ಲಿ ಗೌರವ, ಭಾವನವನ್ನು ಉಂಟು ಮಾಡುವುದು ಒಂದು ಭಾಗವಾಗಿರುತ್ತದೆ ಮಕ್ಕಳು ತಮ್ಮ ಶಿಕ್ಷಣ ಜೊತೆ ಜೊತೆಗೆ ವಿಭಿನ್ನ ಕೌಶಲ್ಯಗಳನ್ನು ಹರಿಯುವುದು ಅತ್ಯವಶ್ಯಕವಾಗಿರುತ್ತದೆ ಹಾಗೆ ತಮ್ಮ ದೈಹಿಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಜೊತೆಗೆ ಆತ್ಮ ರಕ್ಷಣೆ ಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ ಹಾಗೆ ಈ ಒಂದು ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಶಾಲೆಯ ಅಧ್ಯಕ್ಷರಾದಂತಹ ಶ್ರೀಯುತ ಶಾರುಖ್ ಕೆ. ಎಸ್ ಸರ್, ಕಾರ್ಯದರ್ಶಿ ಕೆ ಎಸ್ ಚಾಂದ್ ಬಾಷ , ಖಜಾಂಚಿ ಕೆ ಎಸ್ ಮೆಹಬೂಬ್, ಶಾಲೆಯ ಆಡಳಿತ ಅಧಿಕಾರಿಗಳಾದಂತಹ ಮಹೇಶ್ ಕಟ್ಟ ಸರ್ ಪ್ರಾಚಾರ್ಯರು ಆದಂತಹ ಶ್ರೀನಿವಾಸ್ ಹಾಗೂ ಕರಾಟೆ ಶಿಕ್ಷಕರಾದಂತಹ ಲಿಂಗರಾಜ್ ಈ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.