ಕಂಪ್ಲಿಯಲ್ಲಿ ನಂದಿ ರಥಯಾತ್ರೆ: ಗೋಸಂರಕ್ಷಣೆ ಹಾಗೂ ಸಂಸ್ಕೃತಿಯ ಪ್ರಚಾರ
ಕಂಪ್ಲಿ: ಗೋವು ನಮ್ಮ ಸಂಸ್ಕೃತಿ ಮತ್ತು ಜೀವನೋಪಾಯದ ಪ್ರಮುಖ ಅಂಗವಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಗೋ ಸೇವಾ ಗತಿವಿಧಿ ಹಾಗೂ ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ಸಹಯೋಗದಲ್ಲಿ ನಂದಿ ರಥಯಾತ್ರೆ ಆಯೋಜಿಸಲಾಯಿತು.
ಕಂಪ್ಲಿ ಪಟ್ಟಣಕ್ಕೆ ಆಗಮಿಸಿದ ಗೋ ರಥವನ್ನು ಶ್ರೀ ಉದ್ಭವ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ, ಘೋಷಣೆಗಳೊಂದಿಗೆ ರಥಯಾತ್ರೆಗೆ ಬೆಂಬಲ ವ್ಯಕ್ತಪಡಿಸಿದರು.
ಗೋಸಂರಕ್ಷಣೆಯ ಮಹತ್ವ:
ಕಲ್ಯಾಣ ಚೌಕಿ ಮಠದ ಬಸವರಾಜ್ ಶಾಸ್ತ್ರಿಗಳು ಮಾತನಾಡಿ, "ನಾವು ಪರಂಪರೆಯನ್ನು ಮರೆಯುತ್ತಿರುವುದರಿಂದ ರೈತರ ಮೇಲೆ ಮಾರಕ ರೋಗಗಳ ಹೊಡೆತ ಉಂಟಾಗಿದೆ. ಗೋವು ಆಧಾರಿತ ಕೃಷಿಯ ಮಹತ್ವವನ್ನು ಮರೆತಿದ್ದೇವೆ. ಪ್ರತಿ ಮನೆಯಲ್ಲೂ ಗೋವು ಇರಬೇಕು" ಎಂದು ಸಲಹೆ ನೀಡಿದರು.
ಉಪಸ್ಥಿತಿ:
ಈ ಸಂದರ್ಭದಲ್ಲಿ ರಥಯಾತ್ರೆಯ ಸಂಚಾಲಕ ಧನುಷ್, ನವೀನ್, ಪ್ರಭು, ಕಂಪ್ಲಿ ಕೇಸರಿ ಗೋ ಸೇವಾ ಪಡೆ, ವಿಶ್ವ ಹಿಂದೂ ಪರಿಷತ್ ತಾಲೂಕು ಘಟಕದ ಪದಾಧಿಕಾರಿಗಳು, ಸ್ವಯಂಸೇವಕರು, ಸ್ಥಳೀಯ ಗಣ್ಯರು ಹಾಗೂ ಅನೇಕ ಯುವಕರು ಪಾಲ್ಗೊಂಡರು.
ಗೋ ರಥದ ಮೇಲೆ ಜನತೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಅಂಬೇಡ್ಕರ್ ವೃತ್ತದಲ್ಲಿ ರಥಯಾತ್ರೆ ಮುಕ್ತಾಯಗೊಂಡಿತು.
ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆಗಾಗಿ ಈ ರೀತಿಯ ಕಾರ್ಯಕ್ರಮಗಳು ಮುಂದುವರಿಯಲಿ ಎಂಬುದು ಸಿದ್ದಿ ಟಿವಿಯ ಆಶಯ.