ಕಂಪ್ಲಿ: ಅಕ್ಕಮಹಾದೇವಿ ಜಯಂತಿ ಆಚರಣೆ
ಕಂಪ್ಲಿ ತಾಲ್ಲೂಕು ಕಚೇರಿ ಆವರಣದಲ್ಲಿ ಇಂದು ಅಕ್ಕಮಹಾದೇವಿ ಜಯಂತಿಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ತಹಶೀಲ್ದಾರರಾದ ಶಿವರಾಜ್ ಅವರು ಭಾಗವಹಿಸಿ ಮಾತನಾಡಿದರು. ಅವರು ಅಕ್ಕಮಹಾದೇವಿ ರವರ ಧಾರ್ಮಿಕ ತತ್ತ್ವಗಳು, ಸಾಧನೆ ಹಾಗೂ ಮಹಿಳಾ ಸಬಲಿಕರಣಕ್ಕೆ ನೀಡಿದ ಅಜರ ಅಮರ ಭಾವನೆಯ ಕುರಿತು ವಿವರಿಸಿದರು.
ಅಕ್ಕಮಹಾದೇವಿ ಸಂಘದವರು ಹಾಗೂ ಮಹಿಳಾ ಮಂಡಳಿ ಸದಸ್ಯರು, ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.